ತೊಗರಿಯಲ್ಲಿ ಬಸವನ ಹುಳು ನಿಯಂತ್ರಣಕ್ಕೆ ಔಷಧಿ ತಯಾರಿ ಮಾಡುವ ವಿಧಾನ by RFIS-ADVISORIES published on 2022-09-29T15:33:22Z ರಿಲಯನ್ಸ್ ಫೌಂಡೇಶನ್ ಜಂಟಿ ಕೃಷಿ ನಿರ್ದೇಶಕರು ಬೀದರ್ ಇವರ ಸಹಯೋಗದೊಂದಿಗೆ ರೈತರಿಗೆ ನೀಡುತ್ತಿರುವ ಸಲಹೆ. ತೊಗರಿಯಲ್ಲಿ ಬಸವನ ಹುಳು ನಿತಂರಣಕ್ಕೆ ಬಸವನ ಹುಳು ನಿಯಂತ್ರಣಕ್ಕೆ ಔಷಧಿ ತಯಾರಿ ಮಾಡುವ ವಿಧಾನ ಹೀಗಿದೆ.10 ಕಿಲೋ ಅಕ್ಕಿ ಅಥವಾ ಗೋಧಿ ತೌಡು, 5 ಕಿಲೋ ಬೆಲ್ಲ ಮತ್ತು 6-7.5 ಲೀಟರ್ ನೀರನ್ನು ಬೆರೆಸಿ 36 ಗಂಟೆ ಮುಚ್ಚಿ ಇಡಬೇಕು. ಮರುದಿನ ಸಂಜೆ 250 ಗ್ರಾಂ ಮಿಥೋಮಿಲ್ 40 ಎಸ್.ಪಿ ಕೀಟನಾಶಕವನ್ನು ಮಿಶ್ರಣ ಮಾಡಿ ಸಾಯಂಕಾಲ ಸಂಜೆ 5 ಗಂಟೆಯ ನಂತರ ಹೊಲದ ಸುತ್ತ ಅಂಚಿನಲ್ಲಿ ಅಥವಾ ಸಾಲುಗಳಲ್ಲಿ ಚೆಲ್ಲಬೇಕು. ಸತ್ತ ಹುಳುಗಳನ್ನು ಮರುದಿನವೇ ಆರಿಸಿ 3 ಅಡಿ ಆಳದ ಗುಂಡಿಯಲ್ಲಿ ಹೂಳಬೇಕು. ಮಿಥೋಮಿಲ್ ವಿಷಪಾಷಾಣವನ್ನು ಸಿಂಪಡಣೆ ಮಾಡಿದ ಬೆಳೆಗಳಲ್ಲಿ ಇತರೆ ಸಾಕು ಪ್ರಾಣಿಗಳು ಹಾಗೂ ಜಾನುವಾರುಗಳು ಇದರ ತುಣುಕುಗಳನ್ನು ತಿನ್ನದಂತೆ ಎಚ್ಚರ ವಹಿಸಬೇಕು ಹಾಗೂ ಮಣ್ಣಿನ ಪುಡಿ ಅಥವಾ ನೀರನ್ನು ಚೆಲ್ಲಿ ನಿಷ್ಕ್ರೀಯಗೊಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ಸಹಾಯವಾಣಿ 18004198800 ಧನ್ಯವಾದಗಳು.